ಸಚಿವ ಸುಧಾಕರ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಸಚಿವರ ಆರೋಗ್ಯ ತಪಾಸಣೆ ಅಣಕು

ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ವಿನೂತನ ಪ್ರತಿಭಟನೆ ನಡೆಸಿದರು. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಮುಂದೆ ಯುವ ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ವಿನೂತನ ಧರಣಿ ನಡೆಯಿತು. ಆರೋಗ್ಯ ಸಚಿವರ ಆರೋಗ್ಯ ತಪಾಸಣೆ ಮಾಡುವ ನಾಟಕವಾಡಿ ಸಚಿವರನ್ನು ಲೇವಡಿ ಮಾಡಿದರು.

225 ಶಾಸಕರ ಬಗ್ಗೆ ಅವಹೇಳನ ಮಾಡಿರುವ ಸಚಿವ ಸುಧಾಕರ್ ಮರ್ಯಾದಾ ಪುರುಷೋತ್ತಮ ಎಂದು ಹೇಳುವ ಮೂಲಕ ಶ್ರೀರಾಮಚಂದ್ರನಿಗೂ ಅಪಮಾನ ಮಾಡಿದ್ದಾರೆ. ಕೂಡಲೇ ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಇಲ್ಲವಾದರೆ ಸಿಎಂ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ ಕಾರ್ಯಕರ್ತರು ಸುಧಾಕರ್ ವಿರುದ್ಧ ಕಾರ್ಯಕರ್ತರ ಘೋಷಣೆ ಕೂಗಿದರು.

ಕಾಂಗ್ರೆಸ್ ಮುಖಂಡ ಮನೋಹರ್ ಮಾತನಾಡಿ, ಸುಧಾಕರ್ ಗೆ ಮತಿಭ್ರಮಣೆಯಾಗಿದೆ. 225 ಶಾಸಕರ ವಿರುದ್ಧ ಅವಹೇಳನ ಮಾಡಿದ್ದಾರೆ. ಸಂಗಮೇಶ್ ಶರ್ಟ್ ಬಿಚ್ಚಿದ್ದಕ್ಕೆ ಅಮಾನತು ಮಾಡಿದ್ರು, ಸ್ಪೀಕರ್ ಸೇರಿ ಎಲ್ಲರಿಗೂ ಸುಧಾಕರ್ ಅವಮಾನಿಸಿದ್ದಾರೆ. ಸುಧಾಕರ್ ಶಾಸಕಿಯರಿಗೆ ಅಗೌರವ ತೋರಿದ್ದಾರೆ. ಸಿಡಿ ಸುಧಾಕರ್ ಗೆ ಭಯ ಶುರುವಾಗಿದೆ.ಹಾಗಾಗಿ ಬುದ್ಧಿ ಕಳೆದುಕೊಂಡು ಏನೇನೋ ಮಾಡ್ತಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕಿರು ನಾಟಕ ಪ್ರದರ್ಶನದ ಮೂಲಕ ಸಚಿವರ ಹೇಳಿಕೆ ಬಗ್ಗೆ ವ್ಯಂಗ್ಯವಾಡಿದ ಕಾಂಗ್ರೆಸ್ ನಾಯಕರು, ಪಾತ್ರಧಾರಿಗಳಿಂದ ವ್ಯಂಗ್ಯ ಭರಿತ ಡೈಲಾಗ್ಸ್ ಹೇಳಿಸಿದರು. ಇವರು ಅನಾರೋಗ್ಯ ಸಚಿವರು. ನಿಮಾನ್ಸ್ ಗೆ ಸೇರಿಸಬೇಕು. ಆಪರೇಷನ್ ಕಮಲದಿಂದ ಮತಿ ಭ್ರಮಣೆ ಆಗಿದೆ. ಅಸ್ತವ್ಯಸ್ತ ಆಗಿದ್ದಾರೆ. ಅವರಿಗೆ ಆರೋಗ್ಯದಲ್ಲಿ ಸಮಸ್ಯೆಯಿದೆ. ಸಿಡಿ ವಿಚಾರದಲ್ಲಿ ಭಾಗಿಯಾಗಿ ಬುದ್ದಿ ಕಳೆದುಕೊಂಡಿದ್ದಾರೆ ಎಂದು ರೋಗಿ ಪಾತ್ರಧಾರಿ ಚೆಕ್ ಮಾಡ್ತಾ ಡೈಲಾಗ್ಸ್ ಹೇಳಿದ ಕೈ ಕಾರ್ಯಕರ್ತ ಎಲ್ಲರನ್ನೂ ನಗಿಸಿದರು.

**ಓಂ ಶ್ರೀ ಸಾಯಿ ಗಣಪತಿ ಜ್ಯೋತಿಷ್ಯ ಕೇಂದ್ರ**

ಪಂಡಿತ್ ಶ್ರೀ ಶ್ರೀ ಗಣೇಶ್ ದೀಕ್ಷಿತ್ (ಖ್ಯಾತ ತಂತ್ರಿಗಳು)-9740855086

ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಕೂಡಲೇ ಕರೆ ಮಾಡಿ, ನಿಮ್ಮ ಸಮಸ್ಯೆಯನ್ನು ಪರಿಹಾರಿಸಿಕೊಳ್ಳಿ-9740855086

ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಹಣಕಾಸು ತೊಂದರೆ, ವ್ಯಾಪಾರ ಅಭಿವೃದ್ದಿ, ಪ್ರೀತಿ-ಪ್ರೇಮ ವಿಚಾರ, ಗಂಡ-ಹೆಂಡತಿ ಕಲಹ ಹಾಗೂ ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳನ್ನು ಪೋನಿನ ಮೂಲಕ ಪರಿಹಾರಿಸಿಕೊಳ್ಳಲು ಕರೆ ಮಾಡಿ. ಕೂಡಲೇ ಕೆಳಗಿನ Call Now ಕ್ಲಿಕ್ ಮಾಡಿ
ವಾಟ್ಸ್ಯಾಪ್ ಮೂಲಕ ಗುರೂಜಿಯನ್ನು ಸಂಪರ್ಕಿಸಲು ಕೂಡಲೇ ಕ್ಲಿಕ್ ಮಾಡಿ

Comments